ಪ್ರಕೃತಿ ವಿಕೋಪ ಪ್ರಬಂಧ| Prakruthi Vikopa Essay in Kannada

ಪ್ರಕೃತಿ ವಿಕೋಪ ಪ್ರಬಂಧ Prakruthi Vikopa Prabandha Natural disaster essay in Kannada

ಪ್ರಕೃತಿ ವಿಕೋಪ ಪ್ರಬಂಧ

Prakruthi Vikopa Essay in Kannada
ಪ್ರಕೃತಿ ವಿಕೋಪ ಪ್ರಬಂಧ

ಈ ಲೇಖನಿಯಲ್ಲಿ ಪ್ರಕೃತಿ ವಿಕೋಪದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಪೀಠಿಕೆ

“ಪ್ರಕೃತಿ ಮುನಿಸಿಕೊಂಡರೆ ಅದು ನಿಜಕ್ಕೂ ಮನುಕುಲದ ನಾಶ” ಕ್ಕೆ ದಾರಿಯಾದಂತೆ. ಮನುಷ್ಯನ ಅತಿ ಆಸೆಯಿಂದಾಗಿ ಅಥವಾ ಆತನ ಸೌಕರ್ಯಕ್ಕಾಗಿ ಅರಣ್ಯವನ್ನು ದೋಚುತ್ತಿರುವುದು ಪ್ರಕೃತಿ ವಿಕೋಪ, ಜೀವಸಂಕುಲವೇ ನಾಶ. ಪ್ರಕೃತಿ ವಿಕೋಪವು ಸಮಾಜಕ್ಕೆ ಹಾನಿಯನ್ನುಂಟುಮಾಡುವ ಅನಿರೀಕ್ಷಿತ ಘಟನೆಯಾಗಿದೆ. ಪರಿಸರ ಮತ್ತು ಅದರಲ್ಲಿ ವಾಸಿಸುವ ಜನರಿಗೆ ಹಾನಿ ಮಾಡುವ ಅನೇಕ ನೈಸರ್ಗಿಕ ವಿಕೋಪಗಳಿವೆ. ಅವುಗಳಲ್ಲಿ ಕೆಲವು ಭೂಕಂಪಗಳು , ಚಂಡಮಾರುತಗಳು, ಪ್ರವಾಹಗಳು, ಸುನಾಮಿ, ಭೂಕುಸಿತಗಳು, ಜ್ವಾಲಾಮುಖಿ ಸ್ಫೋಟಗಳು ಮತ್ತು ಹಿಮಕುಸಿತ ಇನ್ನು ಮುಂತಾದವುಗಳಾಗಿವೆ.

ವಿಷಯ ವಿವರಣೆ

ಪ್ರಕೃತಿ ವಿಕೋಪಗಳಾದ ಭೂಕಂಪಗಳು, ಭೂಕುಸಿತಗಳು, ಸುನಾಮಿ, ಬಿರುಗಾಳಿ, ಪ್ರವಾಹ ಮತ್ತು ಅನಾವೃಷ್ಟಿ ನೈಸರ್ಗಿಕ ವಿಕೋಪಗಳಿಗೆ ಕೆಲವು ಉದಾಹರಣೆಗಳಾಗಿವೆ. ಈ ವಿಪತ್ತುಗಳು ಸಮುದಾಯಗಳು ಮತ್ತು ವ್ಯಕ್ತಿಗಳ ಜೀವನವನ್ನು ಮತ್ತು ಪೀಡಿತ ಪ್ರದೇಶದ ಆರ್ಥಿಕ ಚಟುವಟಿಕೆಯನ್ನು ಅಡ್ಡಿಪಡಿಸುತ್ತವೆ. ಇವುಗಳ ಪರಿಣಾಮದಿಂದಾಗಿ ಇಂದು ನಾವು ಹಲವು ಪ್ರಕೃತಿ ವಿಕೋಪಕ್ಕೆ ಬಲಿಯಾಗುತ್ತಿದ್ದೇವೆ. ಕಳೆದ ಒಂದು ಶತಮಾನದಿಂದಲೂ ಕಂಡು ಕೇಳರಿಯದಿದ್ದ ಪ್ರವಾಹದ ಭೀತಿಯಿಂದ ಇಡೀ ದೇಶವೇ ತತ್ತರಿಸಿದೆ. ಮಳೆಯನ್ನೇ ಕಾಣದಿದ್ದ ಪ್ರದೇಶಗಳು ದ್ವೀಪಗಳಂತಾಗಿವೆ. ಒಣಗಿ ಬರಡಾಗಿದ್ದ ಭೂಮಿ ನಿಂತ ನೀರಿನ ಹೊಂಡವಾಗಿದೆ. ಪ್ರಕೃತಿಯ ರುದ್ರ ನರ್ತನಕ್ಕೆ ಪ್ರಾಣಹಾನಿ, ವಸತಿ, ಮರಗಳು, ವಿದ್ಯುತ್ ಕಂಬಗಳು ಧರೆಗುರುಳುತ್ತೀವೆ.

ಪ್ರಕೃತಿ ವಿಕೋಪದ ಪ್ರಕಾರಗಳು

  • ನೆಲದಿಂದ : ಹಿಮಕುಸಿತ, ಭೂಕಂಪ, ಲಹರ್ಭೂ ಕುಸಿತ, ಜ್ವಾಲಾಮುಖಿ,
  • ನೀರಿನಿಂದ : ಪ್ರವಾಹ, ಮೇಘಸ್ಪೋಟ, ಸುನಾಮಿ, ಅತಿವೃಷ್ಟಿ, ಅನಾವೃಷ್ಟಿ/ಬರಗಾಲ,
  • ಹವಾಮಾನ : ಹಿಮ ಸುಂಟರಗಾಳಿ, ಮಂಜುಗೆಡ್ಡೆ ಮಳೆ, ಚಂಡಮಾರುತ,
  • ಬೆಂಕಿ: ಕಾಡ್ಗಿಚ್ಚು,
  • ರೋಗ : ಸಾಂಕ್ರಾಮಿಕ ರೋಗ,
  • ಬಾಹ್ಯಾಕಾಶ : ದೊಡ್ಡ ಉಲ್ಕಾಪಾತ, ಸೌರ ಜ್ವಾಲೆ,

ಪ್ರಕೃತಿ ವಿಕೋಪಗಳು

ಸುನಾಮಿ :

ಸಾಗರಗಳು ಮತ್ತು ಸಮುದ್ರಗಳಲ್ಲಿ ಅತಿ ಎತ್ತರದ ಅಲೆಗಳು ಉತ್ಪತ್ತಿಯಾಗುತ್ತವೆ. ಇದಲ್ಲದೆ, ನೆಲದ ಸ್ಥಳಾಂತರವು ಈ ಹೆಚ್ಚಿನ ಅಲೆಗಳನ್ನು ಉಂಟುಮಾಡುತ್ತದೆ. ಸುನಾಮಿ ತೀರದ ಬಳಿ ಸಂಭವಿಸಿದರೆ ಪ್ರವಾಹಕ್ಕೆ ಕಾರಣವಾಗಬಹುದು. ಸುನಾಮಿಯು ಬಹು ಅಲೆಗಳನ್ನು ಒಳಗೊಂಡಿರುತ್ತದೆ. ಈ ಅಲೆಗಳು ಹೆಚ್ಚಿನ ಪ್ರವಾಹವನ್ನು ಹೊಂದಿವೆ. ಹಾಗೆ ಅತಿ ಹೆಚ್ಚು ಅಪಾಯಕಾರಿಯಾಗಿದೆ. ಇದು ಕೆಲವೇ ನಿಮಿಷಗಳಲ್ಲಿ ಕರಾವಳಿಯನ್ನು ತಲುಪುತ್ತದೆ.

ಕಾಡ್ಗಿಚ್ಚು :

ಅರಣ್ಯಗಳಲ್ಲಿ ನೈಸರ್ಗಿಕವಾಗಿ ಅಥವಾ ಮಾನವ ಚಟುವಟಿಕೆಯಿಂದ ಹರಡುವ ಬೆಂಕಿಯೇ ಕಾಡ್ಗಿಚ್ಚು. ಇದರ ಮೂಲಗಳೆಂದರೆ ಮಿಂಚು, ಸಿಡಿಲು, ಅರಣ್ಯನಾಶ, ಇನ್ನು ಹಲವಾರು ರೀತಿಯಿಂದ ಕಾಡ್ಗಿಚ್ಚು ಉಂಟಾಗುತ್ತದೆ.

ಭೂಕುಸಿತಗಳು :

ಭೂಕುಸಿತಗಳು ಬಂಡೆಗಳ ದೊಡ್ಡ ಬಂಡೆಗಳು ಅಥವಾ ಶಿಲಾಖಂಡರಾಶಿಗಳನ್ನು ಇಳಿಜಾರಿನಲ್ಲಿ ಚಲಿಸುವುದು. ಪರಿಣಾಮವಾಗಿ, ಪರ್ವತಗಳು ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಭೂಕುಸಿತಗಳು ಸಂಭವಿಸುತ್ತವೆ. ಇದಲ್ಲದೆ, ಭೂಕುಸಿತಗಳು ಮಾನವ ನಿರ್ಮಿತ ವಸ್ತುಗಳಿಗೆ ಅನೇಕ ರೀತಿಯಲ್ಲಿ ನಾಶವನ್ನು ಉಂಟುಮಾಡಬಹುದು.

ಹಿಮಕುಸಿತಗಳು :

ಹಿಮಪಾತಗಳು ಭೂಕುಸಿತದಂತಿವೆ. ಆದರೆ ಬಂಡೆಗಳ ಬದಲಿಗೆ ಸಾವಿರ ಟನ್ ಹಿಮವು ಇಳಿಜಾರಿನಲ್ಲಿ ಬೀಳುತ್ತದೆ. ಇದಲ್ಲದೆ, ಇದು ತನ್ನ ದಾರಿಯಲ್ಲಿ ಸೀಗುವ ವಸ್ತು ಅಥವಾ ಎಲ್ಲದಕ್ಕೂ ತೀವ್ರವಾದ ಹಾನಿಯನ್ನುಂಟುಮಾಡುತ್ತದೆ. ಹಿಮಭರಿತ ಪರ್ವತಗಳಲ್ಲಿ ವಾಸಿಸುವ ಜನರು ಯಾವಾಗಲೂ ಅದರ ಬಗ್ಗೆ ಭಯಪಡುತ್ತಾರೆ.

ಪ್ರಕೃತಿ ವಿಕೋಪಕ್ಕೆ ಕಾರಣಗಳು

  • ಮನುಷ್ಯನು ಸಹನೆಯ ಮಿತಿಯನ್ನು ಮೀರಿ ಯಾವಾಗ ವರ್ತಿಸುವನೋ, ಆ ಸಂದರ್ಭದಲ್ಲಿ ಪ್ರಕ್ರತಿ ನೀಡುವ ಪ್ರತ್ಯುತ್ತರವೆ ಬರಗಾಲ, ಅತಿವೃಷ್ಟಿ, ಸುಂಟರಗಾಳಿ, ಭೂ ಕಂಪ, ಜಲಪ್ರಳಯ ಇತ್ಯಾದಿ. ವಿಜ್ಞಾನವು ಮಾನವ ಲೋಕಕ್ಕೆ ವಿವಿದ ಕೊಡುಗೆಯನ್ನು ನೀಡಿದೆ. ಆದರೆ ಮಾನವನು ತನ್ನ ಅತಿ ಆಸೆಯಿಂದ ಅದನ್ನು ದುರ್ಬಳಕೆ ಮಾಡುತ್ತಿದ್ದಾನೆ. ತುಂಬಾ ಆಡಂಬರದ ಜೀವನಶೈಲಿಯನ್ನು ಬಯಸುತ್ತಾನೆ. ಇದರಿಂದಾಗಿ ವಿವಿದ ಅನಗತ್ಯ ವಸ್ತುಗಳನ್ನು ಖರೀದಿಸುತ್ತಾನೆ. ಉದಾಃ ಎಲೆಕ್ಟ್ರಾನಿಕ್ ವಸ್ತುಗಳು, ಪ್ಲಾಸ್ತಿಕ್ ವಸ್ತುಗಳು ಇತ್ಯಾದಿ. ಇವು ಪ್ರಕೃತಿಯ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ. ಹಾಗೆ ಇನ್ನು ಮುಖ್ಯಕಾರಣವೆಂದರೆ ಅರಣ್ಯನಾಶವಾಗಿದೆ.
  • ಮಾನವ ಹೊಸ ಹೊಸ ಆವಿಷ್ಕಾರಗಳನ್ನು ಕಂಡುಹಿಡಿಯುವುದು ಒಳ್ಳೆಯದೇ ಆದರೂ, ಅದು ಪರಿಸರ ಸ್ನೇಹಿ ಆಗುವ ಬದಲು, ಪರಿಸರ ಮಾರಕವಾಗುತ್ತಿರುವುದು ವಿಪರ್ಯಾಸದ ಸಂಗತಿ. ವಾಹನಗಳಿಂದ ಹಾಗು ಕಾರ್ಖಾನೆಗಳಿಂದ ಹೊರಹೊಮ್ಮುವ ರಾಸಾಯನಿಕ ವಸ್ತುಗಳು ಇಂಗಾಲದ ಡೈ ಆಕ್ಸೈಡ್ ನ್ನು ಹೀರಿ ಜೀವ ಅನಿಲವಾದ ಆಮ್ಲಜನಕವನ್ನು ಉತ್ಪತ್ತಿ ಮಾಡುವ ಮರಗಳ ಕೊರತೆ, ಪ್ರಕ್ರತಿಯಲ್ಲಿ ಉಷ್ಣಾಂಶ ಬರಲು ಕಾರಣವಾಗಿದೆ. ಇದರ ಪರಿಣಾಮವಾಗಿ ಹಿಮ ಪ್ರದೇಶಗಳು ಕರಗಿ ಜಲಪ್ರವಾಹವಾಗುತ್ತಿದೆ.
  • ಜಗತ್ತಿನ ವಿವಿದೆಡೆ ಭೂಕಂಪ, ಜಲಪ್ರವಾಹಗಳು, ಅತಿವೃಷ್ಟಿ, ಎಚ್ಚರಿಕೆಯ ಘಟನೆಯನ್ನು ಮೊಳಗಿಸುತ್ತಿದೆಯಾದರು ಮಾನವನು ತನ್ನ ಚಟುವಟಿಕೆಯಲ್ಲಿ ಬದಲಾವಣೆಯನ್ನು ತಂದುಕೊಳ್ಳದೆ ಇರುವುದು ಬೇಸರದ ಸಂಗತಿಯಾಗಿದೆ. ಮಾನವ ತನ್ನ ಸಾಧನೆಯಲ್ಲಿ ಪ್ರಗತಿ ಸಾಧಿಸುವ ದೆಸೆಯಲ್ಲಿ ಪ್ರಕೃತಿಯೊಂದಿಗೆ ಸದ್ದಿಲ್ಲದೆ ಸಂಘರ್ಷಕ್ಕೆ ಇಳಿದಿದ್ದಾನೆ. ಅವನ ಹೊಸ ಆವಿಷ್ಕಾರಗಳು ಮನುಕುಲದ ಮೇಲೆ, ಪ್ರಾಣಿ, ಪಕ್ಷಿ ಜಗತ್ತಿನ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತಿದೆ. ಮನಸ್ಸಿಗೆ ಬಂದಂತೆ ನಡೆಯುತ್ತಿರುವ ಮಾನವನ ಮೇಲೆ ಪ್ರಕ್ರತಿ ಮುನಿಸು ತಾಳಿ, ಇಡೀ ವಾತಾವರಣವನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಪ್ರಕೃತಿಯ ವಿಕೋಪಗಳಾಗುತ್ತಿವೆ.

ಉಪಸಂಹಾರ

ವಿನಾಃ ಕಾರಣ ಕಾಡುಗಳನ್ನು ಬರಿದು ಮಾಡುವುದುನ್ನು ಬಿಟ್ಟು. ಹೆಚ್ಚಾಗಿ ಗಿಡಗಳನ್ನು ಬೆಳೆಸುವ ಸೂಕ್ತ. ಮುಚ್ಚಿಹೋಗುತ್ತಿರುವ ಕೆರೆಗಳ ಅಭಿವೃದ್ಧಿ, ಮಳೆ ನೀರು ಕೆರೆಗಳನ್ನು ತಲುಪುವಂತಾ ವ್ಯವಸ್ಥೆ. ಐಷಾರಾಮಿ ಜೀವನ ಸಂಕೇತವಾಗಿ ವಾಹನ ಉಪಕರಣಗಳನ್ನು ಬಳಸಲಾಗುತ್ತಿದೆ. ಇದರ ಪರಿಣಾಮ ದಟ್ಟ ಹೊಗೆ ಪರಿಸರವನ್ನು ಹಾಳು ಮಾಡುತ್ತಿದೆ. ಹೀಗಾಗಿ ಜನರು ಹೆಚ್ಚು ಪರಿಸರ ಸ್ನೇಹಿ ವಾಹನ, ಉಪಕರಣಗಳನ್ನು ಬಳಸುವುದು ಸೂಕ್ತ.

FAQ

ಪ್ರಕೃತಿ ವಿಕೋಪಗಳ ಪ್ರಕಾರಗಳನ್ನು ತಿಳಿಸಿ ?

ನೆಲ, ಜಲ, ಬೆಂಕಿ, ಹವಾಮಾನ, ರೋಗ ಇನ್ನು ಮುಂತಾದವುಗಳು.

ಪ್ರಕೃತಿ ವಿಕೋಪಗಳ ಪ್ರಕಾರವಾದ ಹವಾಮಾನದಿಂದಾಗುವ ವಿಕೋಪಗಳನ್ನು ತಿಳಿಸಿ ?

ಹಿಮ ಸುಂಟರಗಾಳಿ, ಮಂಜುಗೆಡ್ಡೆ ಮಳೆ, ಚಂಡಮಾರುತ

ಇತರೆ ವಿಷಯಗಳು :

ರಾಷ್ಟ್ರೀಯ ಶಿಕ್ಷಣ ದಿನಾಚರಣೆ ಬಗ್ಗೆ ಪ್ರಬಂಧ‌

ಜಲಮಾಲಿನ್ಯದ ಬಗ್ಗೆ ಪ್ರಬಂಧ

Leave a Comment