ಪರಿಸರ ಸಂರಕ್ಷಣೆ ಪ್ರಬಂಧ | Parisara Samrakshane Essay in kannada

ಪರಿಸರ ಸಂರಕ್ಷಣೆ ಬಗ್ಗೆ ಪ್ರಬಂಧ, Parisara Samrakshane Essay in kannada, parisara samrakshane prabandha in kannada, environmental protection essay in kannada

ಪರಿಸರ ಸಂರಕ್ಷಣೆ ಬಗ್ಗೆ ಪ್ರಬಂಧ

Parisara Samrakshane Essay in kannada
ಪರಿಸರ ಸಂರಕ್ಷಣೆ ಬಗ್ಗೆ ಪ್ರಬಂಧ

ಈ ಲೇಖನಿಯಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಮ್ಮ post ನಲ್ಲಿ ತಿಳಿಸಲಾಗಿದೆ.

ಪಿಠೀಕೆ

ಹಸಿರೇ ಭೂಮಿಯ ಉಸಿರು ಗಿಡ ಬೆಳೆಸಿ ಪರಿಸರವನ್ನು ಉಳಿಸಿ, ನಾವು ವಾಸಿಸುತ್ತಿರುವ ನಮ್ಮಸುತ್ತ ಮುತ್ತಲಿನ ವಾತವರಣವೇ ಪರಿಸರವಾಗಿದೆ. ಪರಿಸರ ಮನುಷ್ಯನ ಜೀವನಕ್ಕೆ ಎಲ್ಲವನ್ನೂ ಕೊಟ್ಟಿದೆ. ಪ್ರತಿಯೊಂದು ಜೀವಿಯು ತನಗೆ ಬೇಕಾದ ಎಲ್ಲವನ್ನು ಪರಿಸರದಿಂದಲೇ ಪಡೆದುಕೊಳ್ಳುವುದು. ಹೀಗಾಗಿ ಪರಿಸರವನ್ನು ʼಪ್ರಕೃತಿ ಮಾತೆʼ ಎಂದು ಕರೆಯುತ್ತಾರೆ. ಪರಿಸರವು ನಮ್ಮ ಉಳಿವು ಮತ್ತು ಭೂಮಿಯ ಅಸ್ತಿತ್ವದ ಆಧಾರವಾಗಿದೆ. ಪರಿಸರವು ನಮ್ಮ ಸುತ್ತಲಿನ ನೈಸರ್ಗಿಕ ಪರಿಸರದ ಒಟ್ಟು ಮೊತ್ತವಾಗಿದೆ. ಪರಿಸರ ಸಂರಕ್ಷಣೆಯು ಮಾನವ ಮತ್ತು ಮಾನವ ನಿರ್ಮಿತ ಚಟುವಟಿಕೆಗಳ ಭೀಕರ ಪ್ರಭಾವದಿಂದ ಪರಿಸರದ ರಕ್ಷಣೆ ಮತ್ತು ಉಳಿಸುವಿಕೆಯನ್ನು ಸೂಚಿಸುತ್ತದೆ.

ವಿಷಯ ವಿವರಣೆ

ನಮ್ಮನೈಸರ್ಗಿಕ ಪರಿಸರವನ್ನು ಹದಗೆಡದಂತೆ ರಕ್ಷಿಸುವುದು ಅತ್ಯಗತ್ಯ ಮತ್ತುಅದಕ್ಕೆ ಇರುವ ಏಕೈಕ ಮಾರ್ಗವೆಂದರೆ ಪರಿಸರ ಸಂರಕ್ಷಣೆ. ಮಾನವನಿಗೂ ಪರಿಸರಕ್ಕು ಗಾಢವಾದ ಸಂಬಂಧವಿದೆ. ಅವನು ಪ್ರಕೃತಿಯಲ್ಲೇ ಹುಟ್ಟಿ ಪ್ರಕೃತಿಯಲ್ಲೇ ಮಣ್ಣಾಗಿ ಹೋಗುತ್ತಾನೆ. ಹೀಗೆ ಬದುಕಿ ಸಾಯುವವರೆಗೂ ಪ್ರಕೃತಿಯ ಮಡಿಲು ಅನಿವಾರ್ಯ. ಆದರೆ ಇತ್ತಿಚೆಗಿನ ದಿನಗಳಲ್ಲಿ ಆಧುನಿಕತೆ, ನಗರೀಕರಣ, ವಿಜ್ಞಾನ ತಂತ್ರಜ್ಞಾನದ ಅಭಿವೃದ್ದಿ, ಹೀಗೆ ಹತ್ತು- ಹಲವು ಕಾರಣಗಳಿಗೆ ಶರಣಾಗಿ, ಅನೇಕ ರೀತಿಯಲ್ಲಿ ಪರಿಸರ ನಾಶವಾಗುತ್ತಿದ್ದು, ಅಲ್ಲದೆ ಹೆಚ್ಚುತಿರುವ ಜನಸಂಖ್ಯೆ, ಪ್ಲಾಸ್ಟಿಕ್‌ ಬಳಕೆ ಹೆಚ್ಚು ಹೀಗೆ ಮುಂತಾದವುಗಳಿಂದ ಪರಿಸರ ನಾಶವಾಗುತಿದೆ. ನಾವು ಈಗಲು ಎಚ್ಚೆತ್ತುಕೊಳ್ಳದಿದ್ಧರೆ ಪರಿಸರದ ನಾಶದ ಜೊತೆಗೆ ನಮ್ಮ ಸರ್ವನಾಶ ನಮ್ಮ ಕಣ್ಣೆದುರೇ ಆಗುತ್ತದೆ.

ಪರಿಸರವು ಇದೀಗ ಗರಿಷ್ಠ ಅಪಾಯದಲ್ಲಿರುವುದರಿಂದ ಪರಿಸರ ಸಂರಕ್ಷಣೆಯ ವಿಷಯವು ಅತ್ಯಂತ ತುರ್ತು ಮಾನವ ನಿರ್ಮಿತ ವಿವಿಧ ಚಟುವಟಿಕೆಗಳಿಂದಾಗಿ, ಪರಿಸ್ಥಿತಿಯು ಭೀಕರ ಅಪಾಯದಲ್ಲಿದೆ. ಹಾನಿಯು ಅಪಾರವಾಗಿದೆ ಮತ್ತು ಹಿಂತಿರುಗದ ಹಂತವನ್ನು ತಲುಪಿದೆ. ನಾವು ಎಷ್ಟೇ ಪ್ರಯತ್ನಿಸಿದರೂ ಈಗಾಗಲೇ ಆಗಿರುವ ವಿನಾಶವನ್ನು ನಾವು ರದ್ದುಗೊಳಿಸಲು ಸಾಧ್ಯವಿಲ್ಲ. ಹೀಗಾಗಿ, ನಿಸರ್ಗದ ಜೊತೆ ಬೆರೆತು ಬಾಳಿದರೆ ಪರಿಸರದ ಮೇಲೆ ದುಷ್ಪರಿಣಾಮ ಬೀರುವ ಪರಿಸರದ ಉಳಿವಿಗೆ ಪೂರಕವಾಗುವ ನಮ್ಮ ಸಾಮಾನ್ಯ ಜ್ಞಾನ ತಾನಾಗಿಯೆ ಬೆಳೆಯುತ್ತದೆ. ಈ ಪ್ರಕ್ರಿಯೆಯ ಉದ್ದೇಶವು ಎಲ್ಲಾ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವುದು ಮತ್ತು ದುರಸ್ತಿ ಮಾಡಲು ಸಾಧ್ಯವಿರುವ ಪರಿಸರದ ಕೆಲವು ಭಾಗಗಳನ್ನು ಸರಿಪಡಿಸಲು ಪ್ರಯತ್ನಿಸುವುದು. ಅತಿಯಾದ ಬಳಕೆ, ಜನಸಂಖ್ಯೆಯ ಬೆಳವಣಿಗೆ ಮತ್ತು ತಂತ್ರಜ್ಞಾನದ ತ್ವರಿತ ಅಭಿವೃದ್ಧಿಯಿಂದಾಗಿ ಜೈವಿಕ ಭೌತಿಕ ಪರಿಸರವು ಶಾಶ್ವತವಾಗಿ ಅವನತಿ ಹೊಂದುತ್ತಿದೆ. ಈ ಚಟುವಟಿಕೆಗಳನ್ನು ನಿಯಂತ್ರಿತ ರೀತಿಯಲ್ಲಿ ನಿರ್ವಹಿಸಲು ಸರ್ಕಾರವು ಕಾರ್ಯತಂತ್ರಗಳನ್ನು ಯೋಜಿಸಿದರೆ ಇದನ್ನು ನಿಲ್ಲಿಸಬಹುದು. ಈ ಪರಿಸರ ಸಂರಕ್ಷಣಾ ಪ್ರಬಂಧವು ವಿದ್ಯಾರ್ಥಿಗಳಿಗೆ ತಾವು ವಾಸಿಸುವ ಪರಿಸರವನ್ನು ಅರ್ಥಮಾಡಿಕೊಳ್ಳಲು ಉತ್ತಮ ಸಹಾಯವಾಗಿದೆ.

ಪರಿಸರ ಸಂರಕ್ಷಣೆಯ ಮಹತ್ವ

  • ಇದರಿಂದ ಭೂಮಿಯ ಮೇಲಿನ ಜೀವವನ್ನು ಪರೀಕ್ಷಿಸುವ ಪರಿಸರ ಸಮತೋಲನವನ್ನು ನಿರ್ವಹಿಸುತ್ತದೆ. ಇದು ಆಹಾರ, ವಸತಿ, ಗಾಳಿಯನ್ನು ಒದಗಿಸುತ್ತದೆ ಮತ್ತು ದೊಡ್ಡ ಅಥವಾ ಚಿಕ್ಕದಾದರೂ ಮಾನವನ ಎಲ್ಲಾ ಅಗತ್ಯಗಳನ್ನು ಪೂರೈಸುತ್ತದೆ.
  • ಪರಿಸರ ಎಷ್ಟು ಮುಖ್ಯವಾಗಿದೆ ಎಂದರೆ ಪರಿಸರವಿಲ್ಲದೆ ನಮ್ಮ ಅಸ್ತಿತ್ವವಿಲ್ಲ. ಇದರ ಬಗ್ಗೆ ಜನರಿಗೆ ಮನವರಿಕೆ ಮಾಡಲು ವಿಶ್ವದಾದ್ಯಂತ ಜೂನ್‌ ೦೫ ರಂದು ಪ್ರತಿವರ್ಷ ವಿಶ್ವ ಪರಿಸರ ದಿನವನ್ನು 1974 ರಿಂದ ಸುಮಾರು 143 ದೇಶಗಳು ಆಚರಿಸುತ್ತವೆ.
  • ಪರಿಸರವು ಪ್ರತಿಯೊಂದು ಜೀವರಾಶಗು ಅತ್ಯಂತ ಅಮೂಲ್ಯ ಕೊಡುಗೆಯಾಗಿದೆ.
  • ಎಲ್ಲಕ್ಕಿಂತ ಮುಖ್ಯವಾಗಿ, ನಮ್ಮ ಪರಿಸರವು ನೈಸರ್ಗಿಕ ಸೌಂದರ್ಯದ ಮೂಲವಾಗಿದೆ ಮತ್ತು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಅವಶ್ಯಕವಾಗಿದೆ.
  • ವಿಶ್ವ ಪರಿಸರ ದಿನವನ್ನ ಪರಿಸರದ ಕಾಳಜಿಯ ಜೊತೆಗೆ ಜನರಗೆ ಪರಿಸರದ ಮಹತ್ವ ಸಾರುವ ಉದ್ದೇಶದಿಂದ ವಿಶ್ವಸಂಸ್ಥೆಯು ಇದನ್ನು ಸ್ಥಾಪಿಸಿತು.

ಪರಿಸರ ಸಂರಕ್ಷಣೆಯ ಪ್ರಯೋಜನೆಗಳು

  • ಪರಿಸರವು ಪ್ರತಿದಿನ ಸಂಭವಿಸುವ ವಿವಿಧ ನೈಸರ್ಗಿಕ ಚಕ್ರಗಳನ್ನು ನಿಯಂತ್ರಿಸುತ್ತದೆ.
  • ಪರಿಸರವು ನಮಗೆ ಮತ್ತು ಇತರ ಜೀವಿಗಳು ಸಾವಿರಾರು ವರ್ಷಗಳಿಂದ ಅಭಿವೃದ್ಧಿ ಹೊಂದಲು ಮತ್ತು ಬೆಳೆಯಲು ಸಹಾಯ ಮಾಡಿದೆ.
  • ಪರಿಸರವು ನಮಗೆ ಫಲವತ್ತಾದ ಭೂಮಿ, ನೀರು, ಗಾಳಿ, ಜಾನುವಾರುಗಳು ಮತ್ತು ಬದುಕಲು ಅಗತ್ಯವಾದ ಅನೇಕ ವಸ್ತುಗಳನ್ನು ಒದಗಿಸುತ್ತದೆ.
  • ಜೀವಿಗಳು ಮತ್ತು ಪರಿಸರದ ನಡುವಿನ ನೈಸರ್ಗಿಕ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
  • ಪರಿಸರವು ನಮಗೆ ಅಸಂಖ್ಯಾತ ಪ್ರಯೋಜನಗಳನ್ನು ನೀಡುತ್ತದೆ, ಅದು ನಮ್ಮ ಇಡೀ ಜೀವನವನ್ನು ಮರುಪಾವತಿಸಲು ಸಾಧ್ಯವಿಲ್ಲ.
  • ಕಾಡು ಮತ್ತು ಮರಗಳು ಗಾಳಿಯನ್ನು ಶೋಧಿಸುತ್ತವೆ ಮತ್ತು ಹಾನಿಕಾರಕ ಅನಿಲಗಳನ್ನು ಹೀರಿಕೊಳ್ಳುತ್ತವೆ.
  • ಸಸ್ಯಗಳು ನೀರನ್ನು ಶುದ್ಧೀಕರಿಸುತ್ತವೆ, ಪ್ರವಾಹದ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ ಮತ್ತು ನೈಸರ್ಗಿಕ ಸಮತೋಲನವನ್ನು ಕಾಪಾಡಿಕೊಳ್ಳುತ್ತದೆ.

ಪರಿಸರ ಸಂರಕ್ಷಣೆಯ ವಿಧಾನಗಳು

  • ಪರಿಸರದ ಹಿತದೃಷ್ಟಿಯಿಂದ ನಾವು ಪರಿಸರ ರಕ್ಷಕರಾಗಬೇಕು. ಪ್ಲಾಸ್ಟಿಕ್ ಬದಲಿಗೆ ಜೈವಿಕ ವಿಘಟನೀಯ ಕ್ಯಾರಿ ಬ್ಯಾಗ್‌ಗಳನ್ನು ಬಳಸುವುದು ಕೂಡ ಪರಿಸರ ಸಂರಕ್ಷಣೆಯ ಪ್ರಮುಖ ವಿಧಾನವಾಗಿದೆ.
  • ಕಡಲತೀರಗಳು, ಸ್ಮಾರಕಗಳು ಮತ್ತು ಮಾರುಕಟ್ಟೆ ಗಳಂತಹ ಸ್ಥಳಗಳಲ್ಲಿ ಪ್ಲಾಸ್ಟಿಕ್ ಚೀಲಗಳು, ಬಾಟಲಿಗಳು, ಆಹಾರ ಪೊಟ್ಟಣಗಳು ​​ಇತ್ಯಾದಿಗಳನ್ನು ಹಾಕಬಾರದು.
  • ನಮ್ಮಿಂದ ಎಷ್ಟು ಸಾಧ್ಯವೊ ಅಷ್ಟು ನಮ್ಮ ಪರಿಸರವನ್ನು ಸುಂದರವಾಗಿ ಇಟ್ಟುಕೊಳ್ಳಬೇಕು. ಜೀವಕ್ಕೆ ಅಗತ್ಯವಾದ ಆಮ್ಲಜನಕವನ್ನು ಹೊರಸೂಸುತ್ತದೆ.
  • ಪರಿಸರ ಸಂರಕ್ಷಣೆಗೆ ಸಹಾಯಕವಾಗುವ ಕೆಲವೊಂದು ಕಠಿಣ ಕ್ರಮಗಳನ್ನು ಕಾನೂನುಗಳಾಗಿಸುವುದು.
  • ಸುತ್ತಮುತ್ತಲು ಹಸಿರು ಹೆಚ್ಚುವಂತೆ ಗಿಡಗಳನ್ನು ನೆಟ್ಟು ಬೆಳೆಸಬೇಕು, ಮರಗಳನ್ನು ಕತ್ತರಿಸುವುದನ್ನು ನಿಲ್ಲಿಸಬೇಕು.
  • ಅತಿಯಾಗಿ ಹೊಗೆ ಬರುವ ವಾಹನ ಗಳನ್ನು ಬಳಸದಿರುವುದು.
  • ಕಡ್ಡಾಯವಾಗಿ ಪರಿಸರ ಶಿಕ್ಷಣ ಕೊಡಬೇಕು. ಪರಿಸರ ಕಾರ್ಯದಲ್ಲಿ ತೊಡಗಬೇಕು.

ಉಪಸಂಹಾರ

ಜೀವಿಗಳ ಅಳಿವು , ಉಳಿವು ಪರಿಸರ ರಕ್ಷಣೆಯನ್ನು ಅವಲಂಬಿಸಿರುತ್ತದೆ. ಮನುಷ್ಯನು ಯಾವಾಗಲು ತನ್ನ ಚಟುವಟಿಕೆಗಳ ಬಗ್ಗೆ ಜಾಗೃತನಾಗಿರಬೇಕು. ಮತ್ತು ನಮ್ಮ ಸುತ್ತ ಮುತ್ತಲಿನ ಪ್ರದೇಶವನ್ನುಆರೋಗ್ಯವಾಗಿಡಲು ಪ್ರಯತ್ನಿಸಬೇಕು. ಈ ಪರಿಸರದ ವಿಷಯದಲ್ಲಿ ಸಾಲುಮರದ ತಿಮ್ಮಕ್ಕನವರು ಮಾದರಿಯಾಗಿದ್ದಾರೆ. ಪರಿಸರ ಸಂರಕ್ಷಣೆಯೇ ಜೀವಿಗಳ ರಕ್ಷಣೆ. ಪರಿಸರ ನಾಶ ವಿಶ್ವನಾಶದ ಮೂಲವಾಗಿದೆ. ಅದಕ್ಕಾಗಿ ನಮ್ಮ ಪರಿಸರವನ್ನು ಸಂರಕ್ಷಿಸಿದರೆ ನಮ್ಮನ್ನು ನಾವೇ ರಕ್ಷಿಸಿಕೊಂಡಂತೆ.

FAQ

ಪರಿಸರ ಸಂರಕ್ಷಣೆಯ ಬಗ್ಗೆ ತಿಳಿಸುವ ವಿಧಿ ಯಾವುದು?

48ಎ ವಿಧಿಯು ತಿಳಿಸುತ್ತದೆ .

ವಿಶ್ವ ಪರಿಸರ ದಿನವನ್ನು ಯಾವ ವರ್ಷದಿಂದ ಆಚರಿಸಲಾಯಿತು?

1974ರಿಂದ ಆಚರಿಸಲಾಯಿತು .

ವಿಶ್ವದಾದ್ಯಂತ ವಿಶ್ವ ಪರಿಸರ ದಿನವನ್ನು ಯಾವ ದಿನಾಂಕದಂದು ಆಚರಿಸಲಾಗುತ್ತದೆ?

ಜೂನ್‌ 05 ರಂದು ಆಚರಿಸಲಾಗುತ್ತದೆ.

ಇತರೆ ಪ್ರಬಂಧಗಳು:

ಕನ್ನಡ ರಾಜ್ಯೋತ್ಸವದ ಬಗ್ಗೆ ಪ್ರಬಂಧ

Leave a Comment